Posts

ಅರುಹಿನ ಮರಹು ಅಹಂಕಾರದ ಕುರುಹು

Image
ಅರುಹಿನ ಮರಹು ಅಹಂಕಾರದ ಕುರುಹು ವಚನ: * ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ* *ಗುರುದ್ರೋಹಿಯನೇನೆಂಬೆ ಲಿಂಗದ್ರೋಹಿಯನೇನೆಂಬೆ?* *ಕೂಡಲ ಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ* *ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು.* ಗುರು ಚೆನ್ನಬಸವಣ್ಣನವರು ಈ ವಚನದಲ್ಲಿ ಅತ್ಯಂತ ಮಹತ್ವಪೂರ್ಣವಾದ ವಿಚಾರವನ್ನು ಹೇಳುತ್ತಿದ್ದಾರೆ. ವ್ಯಕ್ತಿ ತಿಳಿದುಕೊಂಡ ಜ್ಞಾನ ಅಥವಾ ಅರಿತಿರುವ ಜ್ಞಾನ ಅದು ಅರಿವಾಗಿ ಪರಿವರ್ತನೆ ಹೊಂದಬೇಕು. ಅರಿವು ಆಚಾರವಾಗಬೇಕು ಆಗ ಮಾತ್ರ ಅನುಭಾವ ಹೊರಹೊಮ್ಮುತ್ತದೆ. ಅರಿವು ಆಚಾರವಾಗದೆ ಚರಿಸುವ ವ್ಯಕ್ತಿಯ ಮಾತು ಅದು ಕೇವಲ ಮಾತಿನ ಮಥನವಾಗುತ್ತದೆಯೇ ಹೊರತು ಅನುಭಾವವಾಗುವುದಿಲ್ಲ. ಲಿಂಗಾಯತ ಧರ್ಮ ಕೇವಲ ವಿಚಾರ ಪ್ರಧಾನವಾದ ಧರ್ಮವಲ್ಲ. ಇದು ಆಚಾರ ಪ್ರಧಾನವಾದ ಧರ್ಮ. ವಿಚಾರವೆಂಬ ಹೂವು ಆಚಾರವೆಂಬ ಕಾಯಿಯಾದಾಗ ಮಾತ್ರ ಅದು ನಿಷ್ಪತ್ತಿಯ ಹಣ್ಣಾಗಿ ಮತ್ತೆ ತನ್ನ ಬೀಜಗಳನ್ನು ಬಿಟ್ಟು ಮೊಳೆತು ಸಸಿಯಾಗಿ ಮರವಾಗಿ ಮತ್ತೆ ಮತ್ತೆ ವಿಚಾರವೆಂಬ ಹೂವುಗಳಾಗುತ್ತವೆ. ಯಾವ ಧರ್ಮದ ವಿಚಾರಗಳು ಕೇವಲ ವಿಚಾರವೆಂಬ ಹೂವಾಗಿ, ಆಚಾರವೆಂಬ ಕಾಯಾಗದೇ ಹಾಗೆಯೇ ಉದುರಿ ಹೋಗುತ್ತವೆಯೋ ಆ ಧರ್ಮ ಮುಂದುವರೆಯಲಾರದು. ಲಿಂಗಾಯತ‍ ಧರ್ಮದಲ್ಲಿ ವಿಚಾರವೆಂಬ ಹೂವುಗಳನ್ನು ಆಚಾರವೆಂಬ ಕಾಯಿಯನ್ನಾಗಿ ಮಾಡಲು ಶರಣರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಸತ್ಯವನ್ನು ಪ್ರತಿಪಾದನೆ ಮತ್ತು ಆಚರಣೆ ಮಾಡುವುದು ಹೇಡಿಗಳಿಂದ, ಸಮಯ ಸಾಧಕರಿಂದ, ಅಧಿಕಾರಕ್ಕೆ...

ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳ ಹಿಂತೆಗೆಸಲು ಆಗ್ರಹ

Image
    ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳ ಹಿಂತೆಗೆಸಲು ಆಗ್ರಹ  ನಿಜಗುಣಾನಂದ್,ಜಾಮದಾರ್,ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ  ,ಮೀನಾಕ್ಷಿಬಾಳಿ ಇನ್ನೂ ಮುಂತಾದ ಕೆಲವರು  ಬಸವಣ್ಣನವರನ್ನು ಹೊಗಳುತ್ತಲೇ  ಲಿಂಗಾಯತ ಧರ್ಮದ ತತ್ವಗಳ ಮಹತ್ವವನ್ನು ಗೌಣ ಮಾಡಿ, ತತ್ವಗಳನ್ನು ಸಡಿಲಗೊಳಿಸಿ, ಲಿಂಗಾಯತರನ್ನು ಅಂತರ್ಜಾತಿ ವಿವಾಹ ಮತ್ತು ಮಾಂಸಾಹಾರಕ್ಕೆ ಒಗ್ಗಿಸಲು ನೀಡಿರುವ ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳನ್ನು ಕೂಡಲೇ ಹಿಂತಿರುಗಿಸದಿದ್ದರೆ ಲಿಂಗಾಯತ ಸಮಾಜದ ಅಸ್ತಿತ್ವ ಉಳಿಯದು! ಒಂದು ವೇಳೆ ಅಲ್ಪಸ್ವಲ್ಪ ಸಮಾಜ ಉಳಿದರೂ ಅದು ಅರೆಜೀವವಾದಂತೆ ಅಥವಾ ಸತ್ತಂತೆ ಇರುತ್ತದೆ! ಅವರಿಗೆ ಬುದ್ಧಿ, ವಿವೇಕ, ತಿಳುವಳಿಕೆ ನೀಡಬೇಕು. ಹಾಗೂ ಹಿಂತೆಗೆದುಕೊಳ್ಳದಿದ್ದರೆ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಅಥವಾ ಅನ್ವಯವಾಗುವ ಅಂತಹ ಯಾವುದೇ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ!                        ಇಲ್ಲದಿದ್ದರೆ ಅವರುಗಳ ಹೇಳಿಕೆಗಳು ದಾಖಲೆಗಳಾಗಿ ಉಳಿದು, ಅವೇ ಲಿಂಗಾಯತ ಧರ್ಮದ ತತ್ವಗಳೆಂದು ಮೂಢ, ಮುಗ್ಧ, ಅಜ್ಞಾನಿ, ಎಡವಟ್ಟು ಲಿಂಗಾಯತರು ತಪ್ಪಾಗಿ ತಿಳಿದು ಅನುಸರಿಸಿ ಪಾಲಿಸಿದರೆ ಲಿಂಗಾಯತ ಸಮಾಜದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ! ಗುರು ಬಸವದಿ ಪ್ರಮಥ ಪ್ರಣೀತ  ಲಿಂಗಾಯತ ಧರ್ಮ ಮತ್ತು ಸಮಾಜ ಮಹಾಸೌಧದ ಭದ್ರ ...

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಿರು ಲೇಖನ

 *ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಿರು ಲೇಖನ.* *लोकशाही दिनानिमित्त एक छोटासा लेख.* ವಿಶ್ವಗುರು ಬಸವಣ್ಣನವರು 12ನೇ ಶತಮಾನ ಕಂಡ ಶ್ರೇಷ್ಠ ದಾರ್ಶನಿಕ ಪ್ರವಾದಿಗಳು. ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದರ ಮೂಲಕ ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರಿದರು. ಅವರು ಬೋಧಿಸಿದ ವಚನಗಳಲ್ಲಿ ಮಾನವೀಯತೆ ದಯಾಶೀಲತೆ ವಿನಯತೆ ಸಾಮಾಜಿಕ ಸಮಾನತೆ ಧಾರ್ಮಿಕತೆ, ಆಧ್ಯಾತ್ಮಿಕತೆ ವಿಚಾರಗಳು ಇವೆ. ಬಸವಣ್ಣನವರ ಸಮಕಾಲಿನದಲ್ಲಿ 770 ಅವರ ಗಣಗಳು ಆಗಿ ಹೋಗಿದ್ದಾರೆ. ಬಸವಾದಿ ಶರಣರ ವಚನಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಅವು ಕಾಲ ದೇಶ ಭಾಷೆ ಜಾತಿ ಮತ ಪಂಥ ಪಂಗಡಗಳ ಮೀರಿ ಸರ್ವರ ಹೃದಯವನ್ನು ಬೆಸೆಯುತ್ತವೆ. ಶರಣರು ಬೋಧಿಸಿದ ಮುಖ್ಯವಾದ ವಿಚಾರವೆಂದರೆ ಕಾಯಕ ದಾಸೋಹ. ಪ್ರತಿಯೊಬ್ಬ ವ್ಯಕ್ತಿ ದುಡಿದು ಉಣ್ಣಬೇಕು ತನ್ನ ಕುಟುಂಬವನ್ನು ಸ್ವಾಭಿಮಾನದಿಂದ ಮುನ್ನೆಡೆಸಬೇಕು ಮತ್ತು ಗಳಿಸಿದ ಹಣದಲ್ಲಿ ಒಂದು ಪಾಲಾದರೂ ಸಮಾಜ ದೇಶ ವಿಶ್ವದ ಜನತೆಗೆ ದಾಸೋಹದ ಮೂಲಕ ವಿನಿಯೋಗ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಇಂದು ಪ್ರಜಾಪ್ರಭುತ್ವದ ದಿನ ಪ್ರಜಾಪ್ರಭುತ್ವಕ್ಕೆ ಧ್ವನಿಯಾದ ಹಾಗೂ ಪ್ರಜಾಪ್ರಭುತ್ವವನ್ನು ಹುಟ್ಟು ಹಾಕಿದ ಬಸವಾದಿ ಶರಣರನ್ನು ಇಂದು ನಾವು ಸ್ಮರಿಸಿಕೊಳ್ಳೋಣ. ಶರಣರ ಪ್ರಜಾಪ್ರಭುತ್ವವನ್ನು 21ನೇ ಶತಮಾನದಲ್ಲಿ ಯಶಸ್ವಿಗೊಳಿಸುತ್ತಿರುವ ಭಾರತದ ಆದಿಯಾಗಿ ವಿಶ್ವದ ಪ್ರಜಾಪ್ರಭುತ್ವ ಅಳವಡಿಸಿಕೊಂಡ ರಾಷ್ಟ್ರಗಳನ್ನು ಗೌರವಿಸ...

20/25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.

 ಮತ್ತೆ ಮತ್ತೆ ನಮ್ಮನ್ನು ಪ್ರಶ್ನಿಸಿಕೊಳ್ಳಲೇಬೇಕಿದೆ, ಮತ್ತೆ ಮತ್ತೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ, ಏಕೆಂದರೆ ಕೇವಲ 20/25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.  ಕಾರು ಹೊಂದಿದ ವ್ಯಕ್ತಿ ಇದ್ದಕ್ಕಿದ್ದಂತೆ ಕಾರಿನ ಮಹಿಮೆಯಿಂದಲೇ ಬುದ್ದಿವಂತನೆಂತಲೋ, ಶ್ರಮಜೀವಿಯೆಂತಲೋ, ಯಾವುದೋ ಪಕ್ಷ ಅಥವಾ ಸಂಘಟನೆಯ ನಾಯಕನೆಂತಲೋ, ಶ್ರೀಮಂತನೆಂತಲೋ, ಬಹುತೇಕರಿಂದ ಹುಸಿ ಗೌರವ ಪಡೆಯಲಾರಂಭಿಸುತ್ತಾನೆ.  ಆತನ ಹಿನ್ನಲೆ, ಹಣದ ಮೂಲ,ವರ್ತನೆ ಯಾವುದೂ ಮುಖ್ಯವಾಗುವುದಿಲ್ಲ.                            ಅದೇ ಒಬ್ಬ ಸರಳ, ಸಜ್ಜನ, ವಿದ್ಯಾವಂತ, ನಿಜವಾದ ಶ್ರಮಜೀವಿ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲೋ, ಸೈಕಲ್ ನಲ್ಲೋ ಓಡಾಡುತ್ತಾ ಸಾಧಾರಣ ಬಟ್ಟೆ ಧರಿಸಿದ್ದರೆ ನಿಜವಾಗಿ ಆತನಿಗೆ ಸಿಗುವ ಮರ್ಯಾದೆ ಅಷ್ಟಕಷ್ಟೇ. ಅದರಲ್ಲೂ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಆತ ಅವಮರ್ಯಾದೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಬಂಧು ಬಳಗದವರಲ್ಲಿ ಸರಳ ವ್ಯಕ್ತಿಯ ಬಗ್ಗೆ ಆತ ಏನೋ ಒಬ್ಬ ಮಾನಸಿಕ ಅಸ್ವಸ್ಥ ಅಥವಾ ಕೆಲಸಕ್ಕೆ ಬಾರದವನು ಎಂಬಂತೆ ಸಹಾನುಭೂತಿ ವ್ಯಕ್ತವಾಗುತ್ತದೆ.                      ...

ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ

 *🌷ಶ್ರೀವಾಣಿ 21-7-2024🌷* *ಊರಿಂಗೆ ದಾರಿಯನು ಯಾರು ತೋರಿದರೇನು ?* *ಸಾರಾಯದ ನಿಜವನರುಹುವ ಗುರುವು,* *ಯಾರಾದರೇನು ಸರ್ವಜ್ಞ!* ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ. ಹಾಗೆಯೇ ಮುಕ್ತಿಯ ಮಾರ್ಗವನ್ನು ತೋರುವ ಗುರುವಾದರೂ ಹೀಗೇ ಇರಬೇಕು. ಇಂಥವನೇ ಇರಬೇಕು ಎಂದಿಲ್ಲ. ಆದುದರಿಂದ ಸತ್ಯವನ್ನರಿಯುವ ತೀವ್ರವಾದ ಹಂಬಲವುಳ್ಳವರಾಗಿ ಜಾಗ್ರತೆಯಿಂದ ನಡೆದರೆ ಜಗವಿದೆಲ್ಲವೂ ಗುರುವಾಗಿ ಕೈ ಹಿಡಿದು ಮುನ್ನಡೆಸುತ್ತದೆ. *'ಕರಣಾಳು ಬಾ ಬೆಳಕೇ ಕೈ ಹಿಡಿದು ಮುನ್ನಡೆಸು'* ಎಂದು ಮನದುಂಬಿ ಪ್ರಾರ್ಥಿಸಿದರೆ ಸಾಕು ನಿಸರ್ಗವೆ ನಮಗೆ ನಿಜವಾದ ಗುರುವಾಗಿ ನಿಲ್ಲುತ್ತದೆ. ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ಪೂರ್ಣಯೋಗ* ಪುಸ್ತಕದಿಂದ ಪುಟ 36. *ನಿಮಗೆ ನಿಮ್ಮವರೆಲ್ಲರಿಗೆ ಒಳ್ಳೆಯದಾಗಲಿ ಶುಭ ಮುಂಜಾನೆ ಶುಭದಿನ ಶರಣು* ಹಣವಂತ ನಾಗುವ ಬದಲು ಗುಣವಂತನಾಗು ಏಕೆಂದರೆ ನಿಸರ್ಗ ಮತ್ತು ಜನರು ಹಣವಂತ ನನ್ನು ಪೂಜಿಸಿಲ್ಲ ಸ್ಮರಿಸಿಲ್ಲ ಗುಣವಂತನನ್ನು ಪ್ರತಿದಿನವೂ ಸ್ಮರಿಸುವರು ಪೂಜಿಸುವರು🙏🙏🙏🙏🙏🙏 ಸಮಯ ನೀಡಿ ಓದಿದ ತಮಗೆ ಧನ್ಯವಾದಗಳು

ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಬೆಳೆಸುವುದು ತಂದೆ ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ: ಶರಣಾನಂದ ಸ್ವಾಮೀಜಿ

 ಓಂ ಶ್ರೀ ಗುರು ಬಸವ ಲಿಂಗಾಯ ನಮಃ *ಪತ್ರಿಕಾ ಪ್ರಕಟಣೆ ಕೃಪೆಗಾಗಿ* *ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಬೆಳೆಸುವುದು ತಂದೆ ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ: ಶರಣಾನಂದ ಸ್ವಾಮೀಜಿ.* ಇಂದಿನ ಮೊಬೈಲ್ ಜಗತ್ತಿನಲ್ಲಿ ಮಕ್ಕಳು ಸಂಕೋಚಿತ ಮನಸ್ಥಿತಿಯನ್ನು ಹೊಂದಿ ಕುಟುಂಬ ಪ್ರೇಮ ಸಮಾಜ ಪ್ರೇಮ, ರಾಷ್ಟ್ರ ಪ್ರೇಮ, ವ್ಯಕ್ತಿತ್ವ ವಿಕಾಸದಿಂದ ದೂರ ಉಳಿಯುತ್ತಿದ್ದಾರೆ ಇಂತಹ ಪ್ರಕ್ಷಬ್ಧ ಸಮಯದಲ್ಲಿ ತಂದೆ-ತಾಯಿಗಳು, ಸಮಾಜದ ಬಂಧುಗಳು ಮಕ್ಕಳನ್ನು ಸತ್ಸಂಗದಲ್ಲಿ ಭಾಗಿಯಾಗಿಸಿ ಅವರನ್ನು ನೈತಿಕ ಮಾರ್ಗದಲ್ಲಿ ಮುಂದುವರೆಸಬೇಕು ಎಂದು ಹುಬ್ಬಳ್ಳಿ ಪಾರ್ಥ ಹಳ್ಳಿ ಶಾಂತಾಶ್ರಮ ಸಿದ್ಧಾರೂಢ ಮಠದ ಪೂಜ್ಯಶ್ರೀ ಸದ್ಗುರು ಶರಣಾನಂದ ಸ್ವಾಮೀಜಿ ಹೇಳಿದರು. ಅವರು ಅರಿವು ಆಚಾರ ಅನುಭವ ಕೇಂದ್ರದಲ್ಲಿ ಹಮ್ಮಿಕೊಂಡ ತರಂಗಿಣಿ ಓದು ಸಮಾರೋಪ ಸಮಾರಂಭದ ಕಾರ್ಯಕ್ರಮದ ದಿವ್ಯ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದವರು ತಾಲೂಕಿನ ಮಾಧುರಿ ಎಂಬ ಪುಟ್ಟ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಏಳು ತಿಂಗಳಗಳ ಕಾಲ ನಿರಂತರವಾಗಿ ಜಗದ್ಗುರು ಮಾತೆ ಮಹಾದೇವಿಯವರು ಬರೆದ ತರಂಗಣಿ ಗ್ರಂಥವನ್ನು ಓದಿ ಹೇಳಿರುವುದು ಶ್ಲಾಘನೀಯ. ಅತ್ಯಂತ ಕಡುಬಡತನಲ್ಲಿ ಬೆಳೆದು ಬಂದ ಚಿಕ್ಕ ಮಗು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಹಂಬಲ ಹೊಂದಿದವಳಾಗಿದ್ದಾಳೆ, ಏಳು ತಿಂಗಳ ಪ್ರವಚನ ಮಾಲಿಕೆಯಲ್ಲಿ ಸಾಕ್ಷಾತ್ ಅಕ್ಕಮಹಾದೇವಿ ಸ್ವರೂಪದಲ್ಲಿ ನಿಂತು ತರಂಗಣಿ ಗ್ರಂಥವನ್ನು ವಾಚಿಸಿ ನಮ್ಮೆಲ್ಲರಿಗೆ ಕೇ...

ಕಲ್ಯಾಣ ಮಹಾಮನೆ ಧ್ಯೇಯ

Image
 *ಓಂ ಶ್ರೀ ಗುರು ಬಸವ ಲಿಂಗಾಯ ನಮಃ*                 *866666* *ಗುರು ಬಸವಣ್ಣನವರ ಸಂಸ್ಥಾಪಿಸಿದ*        *ಕಲ್ಯಾಣ ಮಹಾಮನೆ ಧ್ಯೇಯ* 1) *ಲಿಂಗಧ್ಯಾನ ಜಗತ್ತು* 2) *ಶರಣ ಜ್ಞಾನ ಜಗತ್ತು* 3) *ವಚನ ಜೀವನ ಜಗತ್ತು* 4) *ಅರಿವು ಆಚಾರ ಅನುಭಾವ ಜಗತ್ತು* 5) *ಸಸ್ಯಾಹಾರ ಜಗತ್ತು* *1)*ಲಿಂಗಧ್ಯಾನ ಜಗತ್ತು:* ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯಾ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. ಜಗತ್ತನ್ನು ಆವರಿಸುವ ವಿಶ್ವ ಚೈತನ್ಯ ಶಕ್ತಿಯೇ(cosmic energy) ದೇವರು. ದೇಹ, ವರ್ಣ, ರೂಪವನ್ನು ತನ್ನಲ್ಲಿ ಗರ್ಭೀಕರಿಸಿಕೊಂಡು ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ ಶಕ್ತಿಗೆ ಕಾರಣವಾದ ಶಕ್ತಿಯೇ ದೇವರು. ಅಂತಹ ದೇವ ತತ್ವವನ್ನು, ಆ ದಿವ್ಯ ಶಕ್ತಿಯನ್ನು ಅರಿಯಲು ಆಯಸ್ಕಾಂತೀಯ ಗುಣಗಳಿಂದ ಆವೃತವಾದ ವಿಶ್ವಾಕಾರ ಸ್ವರೂಪ ಚುಳುಕಾದ ಇಷ್ಟಲಿಂಗವನ್ನು ಕರಕಮಲದಲ್ಲಿರಿಸಿಕೊಂಡು ಲಿಂಗ ನಿರೀಕ್ಷೆಣೆಯೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸಿ ತನ್ನರಿವನ್ನು ಜಾಗೃತಿ ಮಾಡಿಕೊಂಡು ದಿವ್ಯಾನಂದ ಅನುಭವಿಸಿ, ಸದಾ ಅರಿವಿನ ಚೈತನ್ಯದಿಂದ ಕ್ರಿಯಾಶೀಲವಾಗಿರುವುದು. ಈ ಆನಂದವನ್ನು ಎಲ್ಲರಿಗೂ ಹಂಚುವುದು. *2)*ಶರಣ ಜ್ಞಾನ ಜಗತ್ತು:* ಗು...

ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ

Image
ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ  *ಬಸವಾದಿ ಶರಣರ ವಚನಗಳನ್ನು ತತ್ವ ಸಿದ್ದಾಂತಗಳನ್ನು 12ನೇ ಶತಮಾನದಿಂದ 2024 ರ ವರೆಗೆ ಹಾಳು ಮಾಡಲು ವೈದಿಕರು ಪ್ರಯತ್ನ ಮಾಡುತ್ತಿದ್ದಾರೆ:* *ವಚನಗಳಲ್ಲಿ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಸೇರಿಸಿದ್ದ ವಚನಗಳು ಹಾಗು ಆವಗಳನ್ನು ತೆಗೆದು ಹಾಕಿದ್ದ ವಚನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಸಂಸ್ಕೃತ ಸಹಿತ ಮತ್ತು ರಹಿತ ವಚನಗಳು ಓದಿ ಭೇದ ಮತ್ತು ಅನುಭವ ವ್ಯಕ್ತಪಡಿಸಿ:* *ಮುಖ್ಯವಾದುದು: ಬಸವಾದಿ ಶರಣರ ವಚನ ಸಾಹಿತ್ಯ ಓದುವಾಗ, ಬರೆಯುವಾಗ, ಭಾಷಣ ಮಾಡುವಾಗ ಮತ್ತು ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ.* ಮೊದಲು ಬಸವಣ್ಣನವರನ್ನು ಗಡಿ ಪಾರು ಮಾಡಿದರು, ಅಂತರ್ಜಾತಿ ವಿವಾಹ ನೆಪ ಒಡ್ಡಿ ಸಮಗಾರ ಹರಳಯ್ಯ ಬ್ರಾಹ್ಮಣ್ಯ ಮಧುವರಸರನ್ನು ಆನೆ ಕಾಲಿಗೆ ಕಟ್ಟಿ ಎಳೆ ಹೊಟ್ಟಿ ಶಿಕ್ಷೆ ಕೊಟ್ಟರು, ವಚನ ಸಾಹಿತ್ಯ ಸುಟ್ಟರು, ವಚನ ಸಾಹಿತ್ಯ ರಕ್ಷಣೆ ಮಾಡಲು ಹೋರಾಟ ಮಾಡಿದ್ದ ಶರಣರ ಕೊಲೆ ಮಾಡಿ ರಕ್ತದ ಓಕಳಿ ಹರಿಸಿದರು,ಅಂದಿನ ವೈದಿಕರು ಬಿಜ್ಜಳ ಮಹಾರಾಜರ ಮಂತ್ರಿಗಳಾದ ಕೊಂಡಿ ಮಂಚಣ್ಣ, ಶೆಟ್ಟಿ ಮತ್ತು ಭಟ್ಟರು. *ವಚನಗಳು ನೂರಾರು ವ...

ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ

Image
ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ (~ ಮಾತಾಜಿ)           ವಿಶ್ವಗುರು ಬಸವಣ್ಣನವರ 800ನೆಯ ಬಸವ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಶುದ್ಧೀಕರಿಸಿದ ಗುರು ಬಸವಣ್ಣನವರ ವಚನಗಳ ಕೃತಿ 'ಬಸವ ವಚನ ದೀಪ್ತಿ'ಯನ್ನು 1996 ರಲ್ಲಿ ಪ್ರಕಟಿಸಿದೆ. ಗುರು ಬಸವಣ್ಣನವರ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ 3 ಹಂತಗಳನ್ನು ಗುರುತಿಸಿದೆ. 1.  ಮನೆಯ ಸಂಪ್ರದಾಯದಂತೆ ಬಹುದೇವತೋಪಾಸನೆ. 2. ಬಾಲ್ಯದಿಂದ ತಾರುಣ್ಯದವರಿಗೆ ಏಕ ದೇವೋತುಪಾಸನೆ ಏಕದೇವತೋಪಾಸನೆ 3. ಸಾಕ್ಷಾತ್ಕಾರದ ನಂತರ ಏಕದೇವೋಪಾಸನೆ.  ಏಕದೇವತೆ - ಶಿವ ಉಪಾಸಕರಾಗಿದ್ದಾಗ ಬರೆದ ವಚನಗಳಲ್ಲಿ ಕೂಡಲಸಂಗಮದೇವ ಎಂಬ ವಚನಾಂಕಿತ ಹಾಗೆ ಇಟ್ಟು, ಸಾಕ್ಷಾತ್ಕಾರದ ನಂತರ ಏಕದೇವೋಪಾಸಕರಾದಾಗ ಬರೆದ ವಚನಗಳಲ್ಲಿ 'ಶಿವ' ಸೂಚಕವಾದ ಕೂಡಲಸಂಗಮದೇವದ ಬದಲಿಗೆ ಪರಮಾತ್ಮ ಸೂಚಕವಾದ 'ಲಿಂಗದೇವ' ಎಂಬ ವಚನಾಂಕಿತ ಇಟ್ಟು ಪುಸ್ತಕವನ್ನು ಹೊರ ತಂದೆ.  ಪರಮಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಅಪ್ಪಾಜಿ ಇರುವಾಗಲೇ ನಾನು ಈ ವಿಷಯ ಪ್ರಸ್ತಾಪಿಸಿದೆ. 'ಬಸವ ಧರ್ಮದ ಸಂಸ್ಕಾರಗಳು' ಎಂಬ ಪುಸ್ತಕವನ್ನು 1995ರ ಜನವರಿಯಲ್ಲಿ ಶರಣ ಮೇಳದಲ್ಲಿ ಬಿಡುಗಡೆ ಮಾಡಿದೆವು. ಆ ಪುಸ್ತಕದಲ್ಲಿ ಒಂದು ವಚನ ಹೀಗೆ ಮುದ್ರಿಸಿದ್ದೆ. ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು  ಆದಿ ಮಧ್ಯ ಅವಸಾನಗಳಿಲ್ಲದ ಸ್ವತಂತ್ರ ಲಿಂಗವು  ನಿತ್ಯ ನಿರ್ಮಲ ಲಿಂಗವು ಅಯೋನಿ ಸಂಭವನಯ್ಯ ನಮ್ಮ ಲಿಂಗದೇ...

ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ

Image
ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ ಧರ್ಮಕರ್ತನ ಮೇಲೆ ಹೂವ ಸೂಾಡೋಣ ||ಪಲ್ಲವಿ|| ಇಷ್ಟಲಿಂಗವ ನೀಡಿ ಶ್ರೇಷ್ಠ ಮಾರ್ಗವ ತೋರಿ ಲಿಂಗಾಯತ ಧರ್ಮವ ಕೊಟ್ಟ ಮಹಿಮನ ಮೇಲೆ || 1|| ಒಬ್ಬ ದೇವನ ನಂಬಿ ಶ್ರದ್ದೆಯಿಂ ಸಾಗುತ ಅರಿವಿನ ನಿಲುವನ್ನು ಪಡೆದ ಸದ್ಭಕ್ತನ ಮೇಲೆ || 2|| ಕರ್ತನಿಗಲ್ಲದೆ ಕುಶ್ಚಿತಗೆರಗೆನು ಎಂದು ಛಲವ ತೊಟ್ಟ ವೀರ ಮಹೇಶನ ಮೇಲೆ || 3 || ನಾನು ಎನ್ನುವ ಹಮ್ಮನು ಹರಿಯುತ ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ || 4 || ಅಂಗದ ಗುಣವಳಿದು ಲಿಂಗ ಭಾವವು ಬಲಿದು ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ || 5|| ಸತಿಸುತ ಬಳಗದ ಮೋಹವ ಛೇದಿಸಿ ದೇವಗೆ ಸತಿಯಾದ ದಿವ್ಯ ಶರಣನ ಮೇಲೆ || 6 || ಅಂಗ ಲಿಂಗ ಸಮರಸ ಶೃಂಗ ಭಾವವು ಒಲಿದು ತ್ರಿಪುಟಿಯ ಭಾವವಳಿದ ಭಾವಲಿಂಗೈಕ್ಯನ ಮೇಲೆ || 7|| ಆರು ಸ್ಥಲಗಳ ದಾಂಟಿ ಧರೆಯ ಉದ್ದಾರಕ್ಕೆ ಮಹಾಭಕ್ತ ಸ್ಥಲದಲಿ ನಿಂತ ಕರುಣಿಯ ಮೇಲೆ || 8 || ಮುಕ್ತಿದಾತನ ತೋರಿ ಮುಕ್ತಿದಾಯಕನಾದ ಸಚ್ಚಿದಾನಂದನ ಮುದ್ದು ಕಂದನ ಮೇಲೆ || 9 || -✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿಯವರು.

ಬಸವಧರ್ಮ ಪೀಠಕ್ಕೆ ಮುಜುಗರ ತರುವಂತಹ ಘಟನೆ

Image
  ಬಸವಧರ್ಮ ಪೀಠಕ್ಕೆ ಮುಜುಗರ ತರುವಂತಹ ಘಟನೆ ಬೀದರನಲ್ಲಿ "ಬಸವೇಶ್ವರ ದರ್ಶನ ಮಹಾನಾಟ್ಯ" ನಾಟಕದ ಸಮಾಲೋಚನೆ ಸಭೆ ಕರೆಯಲಾಗಿತ್ತು.   ವೇದಿಕೆ ಮೇಲೆ ಮಾತೆ ಗಂಗಾದೇವಿಯವರು, ಭಾಲ್ಕಿ ಶ್ರೀ ಗಳು, ಬೇಳ್ದಾಲೆ ಶರಣರು, ಮಾತೆ ಸತ್ಯಾದೇವೀ ಯವರು ಹಾಗು ಇತರರು ಇದ್ದರು. ಕಾರ್ಯಕ್ರಮದ ಆಯೋಜಕರು ಎಲ್ಲಾ ಪೂಜ್ಯರಿಗೆ ಆಮಂತ್ರಣವನ್ನು ನೀಡಿದ್ದರು. ಯಾವಾಗ ಚನ್ನಬಸವಾನಂದ ಸ್ವಾಮೀಜಿ ಅವರು ಸ್ವಲ್ಪ ತಡವಾಗಿ ಬಂದು ಸಭೆಗೆ ಆಗಮಿಸಿ ವೇದಿಕೆ ಮೇಲೆ ಬಂದು ಕುರ್ಚಿ ಮೇಲೆ ಕೂತ ತಕ್ಷಣ ಗಂಗಾ ಮಾತಾಜಿ ಅವರು ತನ್ನ ಸ್ಥಾನದಿಂದ ಎದ್ದು ಸರಸರನೆ ಹೊರಗೆ ಹೋದರು.  ನಂತರ ಕೆಲವರು ಅವರ ಹಿಂದೆ ಹೋಗಿ ವಿನಂತಿಸಿದಾಗ  ಸಭಾ ಮಂಟಪದ ಹಿಂದಿನ ಕೊನೆಯ ಸಾಲಿನಲ್ಲಿ ಜನರ ಜೊತೆ ಕೆಳಗಡೆಯೆ ಕುಳಿತರು. "ದಯವಿಟ್ಟು ವೇದಿಕೆ ಮೇಲೆ ಬನ್ನಿ" ಎಂದು ಕಾರ್ಯಕ್ರಮದ ಆಯೋಜಕರು ಗಂಗಾಮಾತಾಜಿ ಅವರಿಗೆ ಬಹಳಷ್ಟು ವಿನಂತಿ ಮಾಡಿಕೊಂಡರು. ಆದರೂ ಕೂಡ ಅವರು ಮೇಲೆ ಬರಲಿಲ್ಲ. ಇದನ್ನು ನೋಡಿ, ಸ್ವಲ್ಪ ಸಮಯದ ನಂತರ  ಚನ್ನಬಸವಾನಂದ ಸ್ವಾಮೀಜಿ ಅವರು ದೊಡ್ಡ ಮನಸ್ಸು ಮಾಡಿ ತಾವೇ ವೇದಿಕೆ ಯಿಂದ ಇಳಿದು ಸಭಾ ಮಂಟಪದ ಹೊರಗಡೆ ಹೋಗಿ ಕುಳಿತರು. ಆವಾಗ ಕೆಳಗಡೆ ಕೂತಿದ್ದ ಗಂಗಾ ಮಾತಾಜಿ ಅವರು ಮತ್ತೆ ವೇದಿಕೆ ಮೇಲೆ ಬಂದು ತಮ್ಮ ಸ್ಥಾನ ದಲ್ಲಿ ಕುಳಿತರು.  ಇದನ್ನೆಲ್ಲ ನೋಡಿ ಸಭೆಯಲ್ಲಿ ಭಾಗವಹಿಸಿದ ಜನರೆಲ್ಲಾ  ಅಚ್ಚರಿ ಪಡಬೇಕಾಯಿತು. ಒಂದು ಪೀಠಾಧ್ಯಕ್ಷ ಸ್ಥಾನದಲ...

ಧರ್ಮ ಮತ್ತು ಸಂಸ್ಕಾರ

Image
  ~: ಧರ್ಮ ಮತ್ತು ಸಂಸ್ಕಾರ :~ ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು. ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು. ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು, ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು. ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು, ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು, ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು, ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು, ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು, ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು, ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು. ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು. ~: ಸದ್ಗುರು ಸ್ವಾಮಿ ಲಿಂಗಾನಂದರು :~ Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಶಿವಾನಂದ ಸ್ವಾಮೀಯವರ ಸ್ವಾನುಭಾವಕ್ಕೆ ನಿಲುಕದ ವಚನಗಳು

Image
  ಶಿವಾನಂದ ಸ್ವಾಮೀಯವರ ಸ್ವಾನುಭಾವಕ್ಕೆ ನಿಲುಕದ  ವಚನಗಳು ವಚನ: " ಮರೆಯಲಾಗದು ಹರಿಯ ಮ ರೆಯಲಾಗದು ಬ್ರಹ್ಮನ ! ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ ! ನಮ್ಮ ಕೂಡಲಸಂಗಮದೇವರ ಮರೆಯಲಹುದು " (ಪದಗಳ ಅರ್ಥ: ಮರೆ=ಆಶ್ರಯ; ತೆತ್ತೀಸ ಕೋಟಿ = ಮೂವತ್ತಾರು ಕೋಟಿ; ದೇವರ್ಕಳ = ದೇವತೆಗಳ; ಕೂಡಲಸಂಗಮದೇವಾ=ಲಿಂಗದೇವಾ) ಪರಮ ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿ ಮಾತಾಜಿಯವರು ಅನೇಕಬಾರಿ ಹೀಗೆ ಹೇಳುತ್ತಿದ್ದರು *“ವಚನ ಸಾಹಿತ್ಯವೆನ್ನುವುದು  ಮೂರು ಬೀಗಗಳನ್ನು ಹಾಕಿದ ಭದ್ರವಾದ ಬೀರುವಿನೊಳಗೆ ಇಟ್ಟಿರುವ ನಿಧಿ ಇದ್ದ ಹಾಗೆ ಇದೆ. ಈ ನಿಧಿಯನ್ನು ತೆಗೆಯಲು ಮೂರು ಕೀಲಿಕೈಗಳು ಬೇಕು. ಒಂದನೆಯದು ಸಾಹಿತ್ಯದ ಕೀಲಿಕೈ, ಎರಡನೆಯದು ತತ್ವಜ್ಞಾನದ ಕೀಲಿಕೈ, ಮೂರನೆಯದು ಅನುಭಾವದ ಕೀಲಿಕೈ”* ಇದು ಅಕ್ಷರಶಃ ಸತ್ಯವಾದ ಮಾತು.  ಕೇವಲ ಸಾಹಿತ್ಯ ಜ್ಞಾನ, ಕೇವಲ ತತ್ವಜ್ಞಾನ, ಕೇವಲ ಅನುಭಾವ ಹೊಂದಿದವರಿಗೆ ಗುರು ಬಸವಣ್ಣನವರ ಅಂತರಾಳ ಮತ್ತು ವಚನ ಸಾಹಿತ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯ ಜ್ಞಾನ, ತತ್ವಜ್ಞಾನ ಮತ್ತು ಅನುಭಾವ ಹೊಂದಿದವರಿಂದ ಮಾತ್ರ ವಚನ ಸಾಹಿತ್ಯ ಅರಿತುಕೊಳ್ಳಲು ಸಾಧ್ಯವಿದೆ. ʼವಚನ ದರ್ಶನʼ ಪುಸ್ತಕ ಸಂಪಾದಿಸಿರುವ ಶಿವಾನಂದ ಸ್ವಾಮೀಯವರು ಟಿವಿಯ ಸಂದರ್ಶನವೊಂದರಲ್ಲಿ ಮೇಲಿನ ವಚನವನ್ನು ಉಲ್ಲೇಖಿಸಿ ಗುರು ಬಸವಣ್ಣನವರು ದೇವಾನುದೇವತೆಗಳನ್ನು ನಿರಾಕರಿಸಿಲ್ಲ ಎನ್ನುವ ಅಭಿಪ್ರಾಯವನ್ನು ಕೊಟ್ಟಿದ್ದಾ...

ದೀಕ್ಷೆಯಿಲ್ಲದೆ ಮೋಕ್ಷವಿಲ್ಲ

Image
ದೀಕ್ಷೆಯಿಲ್ಲದೆ ಮೋಕ್ಷವಿಲ್ಲ ೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗ ದೀಕ್ಷೆಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಪ್ರತಿದಿನ ಲಿಂಗಪೂಜೆಯನ್ನು ಮಾಡಿಕೊಳ್ಳಬೇಕು. ಲಿಂಗಪೂಜೆಯಿಂದ ಮನಸು ಹಗುರವಾಗಿ ಆನಂದಮಯವಾಗುತ್ತದೆ. ತ್ರಾಟಕ ಯೋಗದಿಂದ ಕಣ್ಣುಗಳಲ್ಲಿ ಕಾಂತಿ ಹೆಚ್ಚಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗಲೇ ಗುರುವಿನ ಹಸ್ತ ಮಸ್ತಕ ಸಂಯೋಗದಿಂದ ದೀಕ್ಷೆ ಕೊಡಿಸಬೇಕು. ಹಲವು ಕಡೆಗಳಲ್ಲಿ ಮಕ್ಕಳಿಗೆ ದೀಕ್ಷೆ ಕೊಡೋಣವೆಂದು ಗುರುಗಳು ಹೇಳಿದಾಗ ಪಾಲಕರು ಅದನ್ನು ತಿರಸ್ಕರಿಸುತ್ತಾರೆ. ಮಗು ಇನ್ನೂ ಚಿಕ್ಕವನು, ದೊಡ್ಡವನಾದ ಮೇಲೆ ದೀಕ್ಷೆ ಕೊಡಿಸೋಣವೆಂದು ಮಕ್ಕಳನ್ನು ದಾರಿ ತಪ್ಪಿಸುತ್ತಾರೆ. ಅದು ತಪ್ಪು. "ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮದ ಜ್ಞಾನ ನೀಡಬೇಕು. ಸಂಸ್ಕಾರ ಕೊಡಿಸಬೇಕು. ಇಲ್ಲದಿದ್ದರೆ ಮಕ್ಕಳು ದಾರಿ ತಪ್ಪುತ್ತಾರೆ. ಒಮ್ಮೆ ದೀಕ್ಷೆ ಇಲ್ಲದೆ ಮೋಕ್ಷವಿಲ್ಲ' ಎಂಬ ನಮ್ಮ ಲೇಖನ ಪತ್ರಿಕೆಯಲ್ಲಿ ಓದಿ ಒಬ್ಬ ತಾಯಿ ಬಂದು ದೀಕ್ಷೆ ಪಡೆದುಕೊಂಡರು. ಇದು ಇತರರಿಗೂ ಸ್ಫೂರ್ತಿಯಾಗಬೇಕು. ಹುಟ್ಟಿದಾಗಲೂ ಲಿಂಗ ಕಟ್ಟುತ್ತಾರೆ. ಕೊನೆಗೆ ಲಿಂಗೈಕ್ಯರಾಗಿ ಅಂತೀಮ ಸಂಸ್ಕಾರ ನೆರವೇರಿಸುವಾಗಲೂ ಎಲ್ಲಾ ಒಡವೆ ತೆಗೆದು ಕೇವಲ ಲಿಂಗ ಮಾತ್ರ ಕಟ್ಟುತ್ತಾರೆ. ಒಡವೆ ತೆಗೆಯುವಾಗ ಅವು ಬರದಿದ್ದರೆ ಶರೀರದ ಅಂಗಾಂಗಳನ್ನು ಕತ್ತರಿಸಿ ಒಡವೆ ತೆಗೆಯುತ್ತಾರೆ. ಕೊನೆಯ ಕ್ಷಣದಲ್ಲಿ ನಮ...

ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ

Image
ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ Guru Basava was only ever married once, and his wife's name is Nilambike ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ ವಚನ ರಕ್ಷಣೆಗಾಗಿ ಬಸವಣ್ಣನವರನ್ನು ತಮ್ಮ ತತ್ಯದಿಂದ ದೂರಸರಿಯುವಂತೆ ಮಾಡಿದನೆ ? ಹೀಗೆಲ್ಲ ಸಂಶಯಗಳು ಉಳಿದವರಂತೆ ನಮಗೂ ಕಾಡುತ್ತಿದ್ದವು. ಕ್ರಾಂತಿಯೋಗಿ ಬಸವಣ್ಣ ಚಲನ ಚಿತ್ರದಲ್ಲಿ ಹೀಗೇ ಚಿತ್ರಿಸಿರುವೆವಲ್ಲದೆ ತೀರಾ ಇತ್ತೀಚಿನವರೆಗೆ ಹಾಗೆಯೇ ತಿಳಿದಿದ್ದೆವು ಮತ್ತು ಇನ್ನಿತರ ಪುಸ್ತಕಗಳಲ್ಲೂ ಹಾಗೆಯೇ ಬರೆದಿದ್ದೆವು. ದಿವಂಗತ ಹೆಚ್.ದೇವೀರಪ್ಪನವರ ಒಂದು ಲೇಖನ “ಬಸವರಾಜನರಸಿಯರು'' (ಧರ್ಮದುಂದುಭಿ-ಕಲ್ಯಾಣ ಕಿರಣ ವಿಶೇಷಾಂಕ ೧೯೮೭ ಸೆಪ್ಟಂಬರ- ಅಕ್ಟೋಬರ್) ಓದಿದಾಗ ನಮ್ಮ ಚಿಂತನೆಗೆ ಹೊಸ ದಿಕ್ಕು ದೊರಕಿತು. ಶ್ರೀ ದೇವೀರಪ್ಪನವರ ಹೆಸರನ್ನು ಈ ವಿಷಯವಾಗಿ ಖಂಡಿತವಾಗಿಯೂ ಹೇಳುವೆವು. ಕೆಲವು ದೊಡ್ಡ ದೊಡ್ಡ ಸಾಹಿತಿಗಳು ನಮ್ಮ ಅನೇಕ ಹೊಸ ಸಂಶೋಧನಾತ್ಮಕ ವಿಚಾರಗಳನ್ನು ಫಕ್ಕನೆ ಎತ್ತಿಕೊಂಡು ತಮ್ಮ ಪುಸ್ತಕದಲ್ಲಿ ಬರೆದು, ಆ ಬಗ್ಗೆ ನಮ್ಮ ಗ್ರಂಥಗಳನ್ನು ಮಾತ್ರ ಉಲ್ಲೇಖಿಸದ...