Posts

Showing posts from April, 2024

🔯 ನೆನಹು 🔯 ಸಾಮೂಹಿಕ ಪ್ರಾರ್ಥನೆ

ಓಂ ಶ್ರೀ ಗುರು ಬಸವಲಿಂಗಾಯ ನಮಃ.       🔯🏵️*೮೬೬೬೬೬*🏵️🔯 🔯 ನೆನಹು 🔯  ಸಾಮೂಹಿಕ ಪ್ರಾರ್ಥನೆ  ಪ್ರತಿ ದಿನ ಸಂಜೆ 07: ೦೦ ಗಂಟೆಗೆ 🔯🔯🔯🔯🔯🔯🔯🔯  ಮಂತ್ರ ಪುರುಷ ಗುರು ಬಸವಣ್ಣನವರ ಪೂಜೆ ಮುಕ್ತಿದಾಯಕ  ,ಶರಣರಕ್ಷಕ, ನಿತ್ಯ ಮೂರುತಿ ಬಸವನೆ, ಭಕ್ತಿಯಿಂದಲಿ ಚರಣಕಮಲಕೆ, ನಿತ್ಯವಂದಿಪೆ ತಂದೆಯೆ. ॥ಪ॥ ಅರಿವು ಇಲ್ಲದ ಮನುಜ ಜನ್ಮವು, ಶಾಪವೆನ್ನುತ ನೊಂದೆನು, ಮರೆವ ಹರಿಯುವ, ಗುರುವೆ ಎನುತಲಿ ನಿಮ್ಮ ಚರಣವ ಪಿಡಿದೆನು. ನಿಮ್ಮ ಕರುಣೆಯು, ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ.        ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ.     ॥೧॥ ಮೋಹರಹಿತನೆ ಜ್ಞಾನಭರಿತನೇ,ಪರಮಶಾಂತಿಯ ಧಾಮವೆ, ಕಾವುದೆಮ್ಮನು ಕೈಯಬಿಡದೆ, ಹರನ ಕರುಣೆಯ ಕಂದನೆ, ಕಾಮಕ್ರೋಧದ ಕೊಳೆಯ ಕಳೆದು, ಭಕ್ತಿ ಜಲದಲಿ ಮೀಯಿಸು .ಜ್ಞಾನ ದುಡುಗೆಯ ಮನಕೆ ಉಡಿಸಿ ಮೃಡನ ಪಾದಕ್ಕೆ ಏರಿಸು.॥೨॥ ನಿಮ್ಮ ಚಿನ್ಮಯ ಜ್ಞಾನವೆನಗೆ, ಮಾರ್ಗದರ್ಶಕ ದೀಪ್ತಿಯು. ನಿಮ್ಮ ಮಮತೆಯ ಹೃದಯ ಮಂದಿರ, ನನಗೆ ಶಾಂತಿಯ ಹಂದರ. ನಿಮ್ಮ ಪಾವನ ಚರಣಯುಗ್ಮವು, ಭವವ ದಾಂಟಿಪ ದೋಣಿಯು. ಸನ್ನುತಾಂಗನೆ ನಿಮ್ಮ ನೆನಹಿದು, ಬಾಳಿಗಮೃತ ಸೋನೆಯು. ॥ ೩॥ ನೀನು ಆಡಿಪ ಬೊಂಬೆನಾನು ಮಿಡಿಸೇ ನುಡಿಯುವ ವೀಣೆಯು. ನೀನು ಉಡಿಸಿ ಉಣಿಸಿ ಸಲಹಲು, ಎನ್ನ ಬಾಳೋಳು ಝೇಂಕೃತಿ. ಮಂತ್ರ ಪುರುಷನೇ ಶಾಂತಿ ಚಂದ್ರನೆ, ದುರಿತ ...

ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ.

Image
  ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ. 👉 ಕಲಬುರ್ಗಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ ಪ್ರಭುಲಿಂಗ ಮಹಾಗಾಂವಕರ್ ಅವರೇ,....         ತಾವು ಪೂಜ್ಯ ಮಾತಾಜಿ ಸಂಸ್ಮರಣೆ ಕಾರ್ಯಕ್ರಮ ನಿಮಿತ್ಯ ಬರೆದ *ಪತ್ರ* ದಲ್ಲಿ ಈ ರೀತಿ ಬರೆದಿದ್ದೀರಿ. "ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಮಾಡಿದರೆ ಸೂಕ್ತ *ಕಾನೂನು ಕ್ರಮ* ತೆಗೆದುಕೊಳ್ಳಲಾಗುವುದು" ಎಂದು ಬರೆಯಲಾಗಿದೆ.       ತಾವು ಈ ಪತ್ರವನ್ನು ಬರೆದಿರುವ ದಾಟಿಯನ್ನು ನೋಡಿದರೆ ತಾವು ತಮ್ಮನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರೆಂದು ಅಥವಾ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಎಂದು ತಿಳಿದುಕೊಂಡು ಬರೆದಿರುವ ಪತ್ರದ ಹಾಗೆ ಇದೆ.         ಮೊದಲು ಸುಪ್ರೀಂ ಕೋರ್ಟ್ ತೀರ್ಪಿನ *ದಾಖಲೆ* ಯನ್ನು (ಕಾಪಿ) ತೆಗೆದುಕೊಂಡು ಬನ್ನಿ.  ಅದನ್ನು ತೋರಿಸಿ ಹೇಳಿ. ನಿಮಗೆ ಚಾಲೆಂಜ್ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಲಿಂಗದೇವ ವಚನಾಂಕಿತವನ್ನು ಬಳಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸುಮ್ಮನೆ ತಮಗೆ ಬೇಕಾದ ಹಾಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಚೇಂಜ್ ಮಾಡಿ *ಸುಳ್ಳು* ಹೇಳುವುದು ಸರಿಯಲ್ಲ.         ಪೂಜ್ಯ ಮಾತಾಜಿ ಅವರಿಗೆ ತಮ್ಮ ಜೀವಿತಾವಧಿಯಲ್...

ಚಪ್ಪಾಳೆ ಗಿಟ್ಟಿಸಿಕೊಳ್ಳವ ಭರದಲ್ಲಿ ಮೂಲ ಸಿದ್ಧಾಂತಕ್ಕೆ ಧಕ್ಕೆ ತಂದವರಿಗೊಂದು ಪತ್ರ

Image
ಚಪ್ಪಾಳೆ ಗಿಟ್ಟಿಸಿಕೊಳ್ಳವ ಭರದಲ್ಲಿ ಮೂಲ ಸಿದ್ಧಾಂತಕ್ಕೆ ಧಕ್ಕೆ ತಂದವರಿಗೊಂದು ಪತ್ರ   - ಜಾಗತಿಕ ಲಿಂಗಾಯತ ಮಾಹಾಸಭಾದ ಎಸ ಎಮ ಜಮಾದರ ಬೆಳಗಾವಿಯಲ್ಲಿ ೨೭-೦೧-೨೦೨೪ರಿಂದ  ಎರಡು ದಿನದಗಳ ಲಿಂಗಾಯತ ಮಹಿಳಾ ಅಧಿವೆಶನದಲ್ಲಿ ಭಾಷಣ ಮಾಡಿದ ಮೀನಾಕ್ಷಿ ಬಾಳೆಯವರಿಗೆ, ಬಹಳ ಮನನೊಂದು ಬಸವ ಅಭಿಮಾನಿಯೊಬ್ಬರು (ಸು ಮಲ್ಲಿಕಾರ್ಜುನಪ್ಪಾ, ಎಂ ಎ ಬಿ ಇಡ್) ಈ ಪತ್ರವನ್ನು ಬರೆದಿದ್ದಾರೆ. ಸು ಮಲ್ಲಿಕಾರ್ಜುನಪ್ಪಾ,  ಎಂ ಎ, ಬಿ ಇಡ್.