ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ
ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ (~ ಮಾತಾಜಿ) ವಿಶ್ವಗುರು ಬಸವಣ್ಣನವರ 800ನೆಯ ಬಸವ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಶುದ್ಧೀಕರಿಸಿದ ಗುರು ಬಸವಣ್ಣನವರ ವಚನಗಳ ಕೃತಿ 'ಬಸವ ವಚನ ದೀಪ್ತಿ'ಯನ್ನು 1996 ರಲ್ಲಿ ಪ್ರಕಟಿಸಿದೆ. ಗುರು ಬಸವಣ್ಣನವರ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ 3 ಹಂತಗಳನ್ನು ಗುರುತಿಸಿದೆ. 1. ಮನೆಯ ಸಂಪ್ರದಾಯದಂತೆ ಬಹುದೇವತೋಪಾಸನೆ. 2. ಬಾಲ್ಯದಿಂದ ತಾರುಣ್ಯದವರಿಗೆ ಏಕ ದೇವೋತುಪಾಸನೆ ಏಕದೇವತೋಪಾಸನೆ 3. ಸಾಕ್ಷಾತ್ಕಾರದ ನಂತರ ಏಕದೇವೋಪಾಸನೆ. ಏಕದೇವತೆ - ಶಿವ ಉಪಾಸಕರಾಗಿದ್ದಾಗ ಬರೆದ ವಚನಗಳಲ್ಲಿ ಕೂಡಲಸಂಗಮದೇವ ಎಂಬ ವಚನಾಂಕಿತ ಹಾಗೆ ಇಟ್ಟು, ಸಾಕ್ಷಾತ್ಕಾರದ ನಂತರ ಏಕದೇವೋಪಾಸಕರಾದಾಗ ಬರೆದ ವಚನಗಳಲ್ಲಿ 'ಶಿವ' ಸೂಚಕವಾದ ಕೂಡಲಸಂಗಮದೇವದ ಬದಲಿಗೆ ಪರಮಾತ್ಮ ಸೂಚಕವಾದ 'ಲಿಂಗದೇವ' ಎಂಬ ವಚನಾಂಕಿತ ಇಟ್ಟು ಪುಸ್ತಕವನ್ನು ಹೊರ ತಂದೆ. ಪರಮಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಅಪ್ಪಾಜಿ ಇರುವಾಗಲೇ ನಾನು ಈ ವಿಷಯ ಪ್ರಸ್ತಾಪಿಸಿದೆ. 'ಬಸವ ಧರ್ಮದ ಸಂಸ್ಕಾರಗಳು' ಎಂಬ ಪುಸ್ತಕವನ್ನು 1995ರ ಜನವರಿಯಲ್ಲಿ ಶರಣ ಮೇಳದಲ್ಲಿ ಬಿಡುಗಡೆ ಮಾಡಿದೆವು. ಆ ಪುಸ್ತಕದಲ್ಲಿ ಒಂದು ವಚನ ಹೀಗೆ ಮುದ್ರಿಸಿದ್ದೆ. ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು ಆದಿ ಮಧ್ಯ ಅವಸಾನಗಳಿಲ್ಲದ ಸ್ವತಂತ್ರ ಲಿಂಗವು ನಿತ್ಯ ನಿರ್ಮಲ ಲಿಂಗವು ಅಯೋನಿ ಸಂಭವನಯ್ಯ ನಮ್ಮ ಲಿಂಗದೇ...