ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ - ಇದು ಕ್ರಾಂತಿ ಶರಣ ಸರ್ವಜ್ಞ ತ್ರಿಪದಿ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕನ್ನಡ ಸಾಹಿತ್ಯಕ್ಕೆ ಹಿರಿಮೆ ಹೆಚ್ವಸುವಲ್ಲಿ ವಚನ ಸಾಹಿತ್ಯದ ಕೊಡುಗೆ ಬಹು ದೊಡ್ಡ ಪಾತ್ರವಹಿಸುತ್ತದೆ. ಶರಣ ಸರ್ವಜ್ಞ ವಚನ ತ್ರಿಪದಿಗಳು ಅಂಥಹ ಕೊಡುಗೆಯಲ್ಲಿ ಒಂದು. ಜನರನ್ನು ಶರಣರಾನ್ನಾಗಿಸುವ ಅಥವಾ ಜನರನ್ನು ಬಡಿದೆಬ್ಬಿಸುವ ಅಥವಾ ಜನರನ್ನು ಯೋಚನೆಗೆ ಒಳಪಡಿಸುವಂತೆ ಮಡುವ ಶಕ್ತಿ ಸರ್ವಜ್ಞ ತ್ರಿಪದಿಗಳಿಗಿವೆ. ಚಲನಚಿತ್ರಗಳ ಸಂಭಾಷಣೆ ಹಾಡು ಕೊಡಾ ವಚನ ಸಾಹಿತ್ಯದಿಂದ ಪ್ರಭಾವಿತವಾಗಿವೆ. ಉದಾಹರಣೆಗೆ ಈ ಚಿತ್ರದ ಹಾಡು ಪ್ರಭಾವಿತವಾಗಿರುವುದು ಕ್ರಾಂತಿ ಶರಣ ಸರ್ವಜ್ಞ ಈ ವಚನ ತ್ರಿಪದಿಯಿಂದ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ, ಕೊಟ್ಟದ್ದು ಕೆಟ್ಟಿತೆನಬೇಡ ಅದು ಮುಂದೆ ಕಟ್ಟಿಹುದು ಬುತ್ತಿ | ಸರ್ವಜ್ಞ.