ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ

ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ

ಧರ್ಮಕರ್ತನ ಮೇಲೆ ಹೂವ ಸೂಾಡೋಣ ||ಪಲ್ಲವಿ||


ಇಷ್ಟಲಿಂಗವ ನೀಡಿ ಶ್ರೇಷ್ಠ ಮಾರ್ಗವ ತೋರಿ

ಲಿಂಗಾಯತ ಧರ್ಮವ ಕೊಟ್ಟ ಮಹಿಮನ ಮೇಲೆ || 1||


ಒಬ್ಬ ದೇವನ ನಂಬಿ ಶ್ರದ್ದೆಯಿಂ ಸಾಗುತ

ಅರಿವಿನ ನಿಲುವನ್ನು ಪಡೆದ ಸದ್ಭಕ್ತನ ಮೇಲೆ || 2||


ಕರ್ತನಿಗಲ್ಲದೆ ಕುಶ್ಚಿತಗೆರಗೆನು

ಎಂದು ಛಲವ ತೊಟ್ಟ ವೀರ ಮಹೇಶನ ಮೇಲೆ || 3 ||


ನಾನು ಎನ್ನುವ ಹಮ್ಮನು ಹರಿಯುತ

ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ || 4 ||


ಅಂಗದ ಗುಣವಳಿದು ಲಿಂಗ ಭಾವವು ಬಲಿದು

ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ || 5||


ಸತಿಸುತ ಬಳಗದ ಮೋಹವ ಛೇದಿಸಿ

ದೇವಗೆ ಸತಿಯಾದ ದಿವ್ಯ ಶರಣನ ಮೇಲೆ || 6 ||


ಅಂಗ ಲಿಂಗ ಸಮರಸ ಶೃಂಗ ಭಾವವು ಒಲಿದು

ತ್ರಿಪುಟಿಯ ಭಾವವಳಿದ ಭಾವಲಿಂಗೈಕ್ಯನ ಮೇಲೆ || 7||


ಆರು ಸ್ಥಲಗಳ ದಾಂಟಿ ಧರೆಯ ಉದ್ದಾರಕ್ಕೆ

ಮಹಾಭಕ್ತ ಸ್ಥಲದಲಿ ನಿಂತ ಕರುಣಿಯ ಮೇಲೆ || 8 ||


ಮುಕ್ತಿದಾತನ ತೋರಿ ಮುಕ್ತಿದಾಯಕನಾದ

ಸಚ್ಚಿದಾನಂದನ ಮುದ್ದು ಕಂದನ ಮೇಲೆ || 9 ||


-✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿಯವರು.



Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು