ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ
*🌷ಶ್ರೀವಾಣಿ 21-7-2024🌷*
*ಊರಿಂಗೆ ದಾರಿಯನು ಯಾರು ತೋರಿದರೇನು ?*
*ಸಾರಾಯದ ನಿಜವನರುಹುವ ಗುರುವು,*
*ಯಾರಾದರೇನು ಸರ್ವಜ್ಞ!*
ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ. ಹಾಗೆಯೇ ಮುಕ್ತಿಯ ಮಾರ್ಗವನ್ನು ತೋರುವ ಗುರುವಾದರೂ ಹೀಗೇ ಇರಬೇಕು. ಇಂಥವನೇ ಇರಬೇಕು ಎಂದಿಲ್ಲ. ಆದುದರಿಂದ ಸತ್ಯವನ್ನರಿಯುವ ತೀವ್ರವಾದ ಹಂಬಲವುಳ್ಳವರಾಗಿ ಜಾಗ್ರತೆಯಿಂದ ನಡೆದರೆ ಜಗವಿದೆಲ್ಲವೂ ಗುರುವಾಗಿ ಕೈ ಹಿಡಿದು ಮುನ್ನಡೆಸುತ್ತದೆ. *'ಕರಣಾಳು ಬಾ ಬೆಳಕೇ ಕೈ ಹಿಡಿದು ಮುನ್ನಡೆಸು'* ಎಂದು ಮನದುಂಬಿ ಪ್ರಾರ್ಥಿಸಿದರೆ ಸಾಕು ನಿಸರ್ಗವೆ ನಮಗೆ ನಿಜವಾದ ಗುರುವಾಗಿ ನಿಲ್ಲುತ್ತದೆ.
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ಪೂರ್ಣಯೋಗ* ಪುಸ್ತಕದಿಂದ ಪುಟ 36. *ನಿಮಗೆ ನಿಮ್ಮವರೆಲ್ಲರಿಗೆ ಒಳ್ಳೆಯದಾಗಲಿ ಶುಭ ಮುಂಜಾನೆ ಶುಭದಿನ ಶರಣು* ಹಣವಂತ ನಾಗುವ ಬದಲು ಗುಣವಂತನಾಗು ಏಕೆಂದರೆ ನಿಸರ್ಗ ಮತ್ತು ಜನರು ಹಣವಂತ ನನ್ನು ಪೂಜಿಸಿಲ್ಲ ಸ್ಮರಿಸಿಲ್ಲ ಗುಣವಂತನನ್ನು ಪ್ರತಿದಿನವೂ ಸ್ಮರಿಸುವರು ಪೂಜಿಸುವರು🙏🙏🙏🙏🙏🙏 ಸಮಯ ನೀಡಿ ಓದಿದ ತಮಗೆ ಧನ್ಯವಾದಗಳು
Comments
Post a Comment