ಅರುಹಿನ ಮರಹು ಅಹಂಕಾರದ ಕುರುಹು
ಅರುಹಿನ ಮರಹು ಅಹಂಕಾರದ ಕುರುಹು ವಚನ: * ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ* *ಗುರುದ್ರೋಹಿಯನೇನೆಂಬೆ ಲಿಂಗದ್ರೋಹಿಯನೇನೆಂಬೆ?* *ಕೂಡಲ ಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ* *ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು.* ಗುರು ಚೆನ್ನಬಸವಣ್ಣನವರು ಈ ವಚನದಲ್ಲಿ ಅತ್ಯಂತ ಮಹತ್ವಪೂರ್ಣವಾದ ವಿಚಾರವನ್ನು ಹೇಳುತ್ತಿದ್ದಾರೆ. ವ್ಯಕ್ತಿ ತಿಳಿದುಕೊಂಡ ಜ್ಞಾನ ಅಥವಾ ಅರಿತಿರುವ ಜ್ಞಾನ ಅದು ಅರಿವಾಗಿ ಪರಿವರ್ತನೆ ಹೊಂದಬೇಕು. ಅರಿವು ಆಚಾರವಾಗಬೇಕು ಆಗ ಮಾತ್ರ ಅನುಭಾವ ಹೊರಹೊಮ್ಮುತ್ತದೆ. ಅರಿವು ಆಚಾರವಾಗದೆ ಚರಿಸುವ ವ್ಯಕ್ತಿಯ ಮಾತು ಅದು ಕೇವಲ ಮಾತಿನ ಮಥನವಾಗುತ್ತದೆಯೇ ಹೊರತು ಅನುಭಾವವಾಗುವುದಿಲ್ಲ. ಲಿಂಗಾಯತ ಧರ್ಮ ಕೇವಲ ವಿಚಾರ ಪ್ರಧಾನವಾದ ಧರ್ಮವಲ್ಲ. ಇದು ಆಚಾರ ಪ್ರಧಾನವಾದ ಧರ್ಮ. ವಿಚಾರವೆಂಬ ಹೂವು ಆಚಾರವೆಂಬ ಕಾಯಿಯಾದಾಗ ಮಾತ್ರ ಅದು ನಿಷ್ಪತ್ತಿಯ ಹಣ್ಣಾಗಿ ಮತ್ತೆ ತನ್ನ ಬೀಜಗಳನ್ನು ಬಿಟ್ಟು ಮೊಳೆತು ಸಸಿಯಾಗಿ ಮರವಾಗಿ ಮತ್ತೆ ಮತ್ತೆ ವಿಚಾರವೆಂಬ ಹೂವುಗಳಾಗುತ್ತವೆ. ಯಾವ ಧರ್ಮದ ವಿಚಾರಗಳು ಕೇವಲ ವಿಚಾರವೆಂಬ ಹೂವಾಗಿ, ಆಚಾರವೆಂಬ ಕಾಯಾಗದೇ ಹಾಗೆಯೇ ಉದುರಿ ಹೋಗುತ್ತವೆಯೋ ಆ ಧರ್ಮ ಮುಂದುವರೆಯಲಾರದು. ಲಿಂಗಾಯತ ಧರ್ಮದಲ್ಲಿ ವಿಚಾರವೆಂಬ ಹೂವುಗಳನ್ನು ಆಚಾರವೆಂಬ ಕಾಯಿಯನ್ನಾಗಿ ಮಾಡಲು ಶರಣರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಸತ್ಯವನ್ನು ಪ್ರತಿಪಾದನೆ ಮತ್ತು ಆಚರಣೆ ಮಾಡುವುದು ಹೇಡಿಗಳಿಂದ, ಸಮಯ ಸಾಧಕರಿಂದ, ಅಧಿಕಾರಕ್ಕೆ...


Comments
Post a Comment